Uncategorized
ಅವರ ಈ ಹೊಸ ಉದ್ಯಮವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ, ಅವರಿಗೆ ಉತ್ತಮ ಯಶಸ್ಸು ಸಿಗಲಿ ಎಂದು ಶುಭ ಹಾರೈಸಲಾಯಿತು.

ನಿಪ್ಪಾಣಿ ಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ ನಮ್ಮ ಆತ್ಮೀಯರು, ಪಕ್ಷದ ಕಾರ್ಯಕರ್ತರು ಹಾಗೂ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಜಯಕುಮಾರ ಖೋತ (ಶಮನೇವಾಡಿ) ಅವರ ಒಡೆತನದ ನೂತನ ಶ್ರೀ “ವೀತರಾಗಾಯ” (MRPL) ಪೆಟ್ರೋಲ್ ಪಂಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ,

ಚಿಂಚಣಿ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶಿವಪ್ರಸಾದ ದೇವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಿ, ಈ ನೂತನ ಉದ್ಯಮಕ್ಕೆ ಚಾಲನೆ ನೀಡಿ, ಸತ್ಕಾರವನ್ನು ಸ್ವೀಕರಿಸಲಾಯಿತು.
ಅವರ ಈ ಹೊಸ ಉದ್ಯಮವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ, ಅವರಿಗೆ ಉತ್ತಮ ಯಶಸ್ಸು ಸಿಗಲಿ ಎಂದು ಶುಭ ಹಾರೈಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ , ಶ್ರೀ ಜಿತೇಶ ಖೋತ, ಶ್ರೀ ನಿಖಿಲ ಖೋತ, ಶ್ರೀ ಅಭಿಷೇಕ ಖೋತ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರು, ಸ್ಥಳೀಯ ಪ್ರಮುಖ ನಾಯಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



