Uncategorized

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗೆ ಇಳಿದ ಕಾರ್ಮಿಕರು.

ಕಾರ್ಮಿಕ ಸಚಿವರ ತವರು ಜಿಲ್ಲೆಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗೆ ಇಳಿದು ಕಾರ್ಮಿಕರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ.

1 ಧಾರವಾಡ ಜಿಲ್ಲಾ ಕಟ್ಟಡ ಕಾರ್ಮಿಕರು

2 ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

3 ಕಾರ್ಮಿಕ ಸಚಿವರು ತವರು ಜಿಲ್ಲೆಯಲ್ಲಿ ಕಾರ್ಮಿಕರ ಚಳುವಳಿ4 ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟಿಸಿ ಸರಕಾರಕ್ಕೆ ಮನವಿ

2021ರ ಅನ್ವಯ ಶೈಕ್ಷಣಿಕ ಧನ ಸಹಾಯ ಹೆಚ್ಚಳ ಗೊಳಿಸಿಲು ಸೇರಿ ಕಾರ್ಮಿಕ‌ ಇಲಾಖೆ ತಂತ್ರಾಂಶ ದೋಷ ಸರಿಪಡಿಸಲು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಕಾರ್ಮಿಕ‌ ಇಲಾಖೆಯ ಸಚಿವ ಸಂತೋಷ ಲಾಡ್ ಅವರ ತವರು ಜಿಲ್ಲೆ ಧಾರವಾಡದಲ್ಲಿ ಕಾರ್ಮಿಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ‌ಆಕ್ರೋಶ ಹೊರಹಾಕಿದರು.‌

ನಗರದ ಜಿಲ್ಲಾಧಿಕಾರಿ‌ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರ ಸೇರಿ ಇಲಾಖೆಯ ಅಧಿಕಾರಿಗಳ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ‌ಕಾರ್ಮಿಕ‌ ಇಲಾಖೆ ಮಂಡಳಿಯ ನೂತನ ತಂತ್ರಾಂಶ ದೋಷದಿಂದ ಕಾರ್ಮಿಕರಿಗೆ ಹಲವು ರೀತಿಯ ತೊಂದರೆ ಉಂಟಾಗುತ್ತಿದೆ.

ಇದರ ಬಗ್ಗೆ ಇಲಾಖೆಯ ಅಧಿಕಾರಿಗಳಿ ಈಗಾಗಲೇ ಸಾಕಷ್ಡು ಬಾರಿ ಮನವರಿಕೆ ಮಾಡಿಕೊಡಲಾಗಿದೆ, ಆದರೂ ದೋಷ ನಿವಾರಣೆಗೆ ಯಾವುದೇ ಕ್ರಮವಾಗಿಲ್ಲ. 2021ರ ಅನ್ವಯ ಶೈಕ್ಷಣಿಕ ಧನ ಸಹಾಯ ಹೆಚ್ಚಳ ಮಾಡಬೇಕು. ಇನ್ನೂ ಹತ್ತು ಹಲವು ಬೇಡಿಕೆಗಳಿದ್ದು ಸರ್ಕಾರ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಜತೆಗೆ ಈಗಾಗಲೇ ಇಲಾಖೆಯ ಸಚಿವರಿಗೂ ನಮ್ಮ ಬೇಡಿಕೆಗಳ ಬಗ್ಗೆ ಹಲವು ಬಾರಿ ಮನವಿ ನೀಡಿದ್ದೇವೆ ಭರವಸೆ ಸಿಗುತ್ತಿದೆ ಹೊರತು, ಬೇಡಿಕೆ ಈಡೇರಿಸುವ ಕೆಲಸಗಳು ಆಗುತ್ತಿಲ್ಲ. ಹಾಗಾಗಿ ಈ‌ ಕೂಡಲೇ ಸಿಎಂ‌ಸಿದ್ದರಾಮಯ್ಯವರು ನಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕು ಎಂದು ಮನವಿ‌ ಮಾಡಿದರು. ಜಿಲ್ಲಾಧಿಕಾರಿಗಳ‌ ಮೂಲಕ‌ ಮುಖ್ಯಮಂತ್ರಿಗಳಿಗೆ ಮನವಿ‌ಸಲ್ಲಿಸಿದರು.‌

Related Articles

Leave a Reply

Your email address will not be published. Required fields are marked *

Back to top button