
ಮೈಸೂರು : ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ, ಶಸ್ತ್ರಚಿಕಿತ್ಸೆಯ ನಂತರ ಮರಣ ಹೊಂದಿದ ಘಟನೆ ಮೈಸೂರಿನಲ್ಲಿ ನಡೆದಿದ್ದು. ಇದೀಗ ಬಾಲಕಿಯ ಪೋಷಕರು ವೈದ್ಯರ ನಿರ್ಲಕ್ಷದಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ.
14 ವರ್ಷ ವಯಸ್ಸಿನ ಲಕ್ಷ್ಮೀ ಎಂಬ ಬಾಲಕಿ ಮೈಸೂರಿನ ಶಾರಾದಾ ದೇವಿನಗರದ ಪೋಷಕರೊಂದಿಗೆ ವಾಸಿಸುತ್ತಿದ್ದಳು. ಆದರೆ ಇತ್ತೀಚೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೊಟ್ಟೆನೋವಿನ ಚಿಕಿತ್ಸೆಗಾಗಿ ಜನತಾನಗರ ಕಾಂಗ್ರೆಸ್ ಮುಖಂಡ ಜೆಜೆ ಆನಂದ್ ಒಡೆತನದ ಮೌರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾಳೆ. ಇದೇ ವೇಳೆ ಹೊಟ್ಟೆಯಲ್ಲಿ ಸಣ್ಣ ಗೆಡ್ಡೆ ಇದೆ ಅನ್ನೋ ಕಾರಣಕ್ಕಾಗಿ ಆಪರೇಷನ್ ಮಾಡಿದ್ದಾರೆ ಎನ್ನಲಾಗಿದ್ದು. ಆಪರೇಷನ್ ಮಾಡುವ ವೇಳೆ ಅತಿಯಾದ ಅನಾಸ್ತೇಶಿಯಾ ಬಳಕೆ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ.