ಬೆಳಗಾವಿ

ಶ್ರೀ ಸಮಾದೇವಿ ವಾರ್ಷಿಕ ಜಯಂತಿ ಜರುಗಿದ ಚಂಡಿಕಾ ಹೋಮ,ವಿವಿಧ ಧಾರ್ಮಿಕ ಕಾರ್ಯಕ್ರಮ.

ಬೆಳಗಾವಿ : ಸಮಾದೇವಿ ಗಲ್ಲಿಯಲ್ಲಿರುವ ಸಮಾದೇವಿ ಮಂದಿರದಲ್ಲಿ ಶ್ರೀ ಸಮಾದೇವಿಯ ವಾರ್ಷಿಕ ಜಯಂತಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅನ್ನಪ್ರಸಾದ ಸಂತರ್ಪಣೆ ಜರುಗಿತು

ಪ್ರತಿ ವರ್ಷದಂತೆ, ಶ್ರೀ ಸಮಾದೇವಿಯವರ ವಾರ್ಷಿಕ ಜಯಂತಿಯ ಕೊನೆಯ ದಿನದಂದು, ಮಂಗಳವಾರ ಬೆಳಿಗ್ಗೆ ವೈಶ್ಯವಾಣಿ ಸಮಾಜ, ವೈಶ್ಯವಾಣಿ ಯುವ ಸಂಘಟನೆ ಮತ್ತು ವೈಶ್ಯವಾಣಿ ಮಹಿಳಾ ಮಂಡಳ ಮತ್ತು ಶ್ರೀ ಸಮಾದೇವಿ ಸಂಸ್ಥಾನ, ಸಮಾದೇವಿ ಗಲ್ಲಿ, ಬೆಳಗಾವಿ ಇವುಗಳ ಜಂಟಿ ಆಶ್ರಯದಲ್ಲಿ ನವ ಚಂಡಿಕಾಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮಹಾಪ್ರಸಾದ ಸಂಪರ್ಪಣೆ ಉತ್ಸಾಹದಿಂದ ಜರುಗಿತು

ಬೆಳಿಗ್ಗೆ, ಶ್ರೀ. ಸಮಾದೇವಿ ವಿಗ್ರಹದ ಮಹಾಭಿಷೇಕದ ನಂತರ, ಸಂದೀಪ್ ಕಡೋಲ್ಕರ್ , ಸ್ಮಿತಾ ಕಡೋಲ್ಕರ್, ವೈಷ್ಣವಿ ಧನ್ವಾಡೆ ಅವರು ಚಂಡಿಕಾ ಹೋಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ, ಋಷಿಕೇಶ್ ಹೆರ್ಲೇಕರ್ ಗುರೂಜಿ, ನವಥೆ ಗುರೂಜಿ ಪುಣೆ, ಭೂಷಣ್ ಕೇನ್ ಪುಣೆ, ರಾಜೇಶ್ ರಾನಡೆ ಗುರೂಜಿ ಪುಣೆ, ನೀಲಕಂಠ ಹೆರ್ಲೇಕರ್ ಗುರೂಜಿ, ದತ್ತಾತ್ರೇಯ ಭಾವೆ ಗುರೂಜಿ ಮತ್ತು ಪವನ್ ದೇಶಪಾಂಡೆ ಗುರೂಜಿ ಅವರ ನೇತೃತ್ವದಲ್ಲಿ, ನವಚಂಡಿಕಾ ಹೋಮ್ ವನ್ನು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ನೆರವೇರಿಸಲಾಯಿತು.

ಮಧ್ಯಾಹ್ನ 12 ಗಂಟೆಯ ನಂತರ, ಶ್ರೀ ಸಮಾದೇವಿಗೆ ನೈವೇದ್ಯ ಅರ್ಪಿಸುವುದರೊಂದಿಗೆ ಮಹಾಪ್ರಸಾದ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಶ್ರೀದೇವಿಯ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ದತ್ತ ಕಣಬರ್ಗಿ, ಟ್ರಸ್ಟಿಗಳಾದ ಮೋಹನ್ ನಕಾಡಿ, ಮಹಾದೇವ್ ಗವಾಡೆ, ಮೋತಿಚಂದ್ ದೋರ್ಕಾಡಿ, ಕಾರ್ಯದರ್ಶಿ ಅಮಿತ್ ಕುಡ್ತುರ್ಕರ್, ಯುವ ಸಂಘಟನೆಯ ಅಧ್ಯಕ್ಷ ರೋಹನ್ ಜುವಲಿ, ಉಪಾಧ್ಯಕ್ಷ ರವಿ ಕಲ್ಘಟ್ಗಿ, ಮಹಿಳಾ ಮಂಡಲದ ಅಧ್ಯಕ್ಷೆ ಅಂಜಲಿ ಕಿನಾರಿ, ಕಾರ್ಯದರ್ಶಿ ವೈಶಾಲಿ ಪಾಲ್ಕರ್, ಪ್ರಸಾದ್ ನಿಖರ್ಗೆ, ಪರೇಶ್ ನರ್ವೇಕರ್ ಮತ್ತು ಕಾರ್ಯಕಾರಿ ಮಂಡಳಿ ಮಹಿಳಾ ಮಂಡಲದ ಸದಸ್ಯರು ದೇವಿಯ ಜಯಂತಿ ಮಹೋತ್ಸವ, ನವಚಂಡಿಕಾ ಹೋಮ ಮತ್ತು ಮಹಾಪ್ರಸಾದ ಸಂತರ್ಪಣ ಕಾರ್ಯವನ್ನು ಯಶಸ್ವಿಗೊಳಿಸಲು ಶ್ರಮಿಸಿದರು.

 

Related Articles

Leave a Reply

Your email address will not be published. Required fields are marked *

Back to top button