ಬೆಂಗಳೂರು

ನಟಿ ರನ್ಯಾ ರಾವ್ ಗೆ 12 ಎಕರೆ ಭೂಮಿ : ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ.

ನಟಿ ರನ್ಯಾ ರಾವ್ ಗೆ ನಿಯಮ ಹಾಗೂ ಕಾನೂನು ಚೌಕಟ್ಟಿನಲ್ಲಿಯೇ 12 ಎಕರೆ ಭೂಮಿ ಉದ್ಯಮಕ್ಕಾಗಿ ಮಂಜೂರು ಮಾಡಲಾಗಿದೆ ಎಂದು ಮಾಜಿ ಕೈಗಾರಿಕಾ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು

ಈ ಕುರಿತು ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಅವರು 2022 ರಲ್ಲಿ ರನ್ಯಾರಾವ್ ಎಂಬ ಉದ್ಯಮಿ 12 ಎಕರೆ ಭೂಮಿ ಬೇಕು ಎಂದು ಮನವಿ ಸಲ್ಲಿಸಿರುತ್ತಾರೆ. 2023 ಜನವರಿಯಲ್ಲಿ ಅದು ಮಂಜೂರಾಗಿರುತ್ತದೆ. ಆ ಸಂದರ್ಭದಲ್ಲಿ ಕೈಗಾರಿಕಾ ಸಚಿವನಾಗಿ ನಾನು ಕಮಿಟಿಯ ಛೇರ್ಮನ್ ಆಗಿರುತ್ತೇನೆ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಅಲ್ಲಿ ಅನುಮೋದನೆ ನೀಡಿ ನಂತರ ಮನವಿಯನ್ನ ಏಕಗವಾಕ್ಷಿ ಸಮಿತಿಯ ಮುಂದೆ ತರುತ್ತಾರೆ ಅಲ್ಲಿ 30 ಜನ ತಜ್ಞ ಹಿರಿಯ ಅಧಿಕಾರಿಗಳನನ್ನೊಳಗೊಂಡ ಸಮಿತಿಯಲ್ಲಿ 12 ಎಕರೆ ಭೂಮಿ ಬೇಡಿಕೆಯ ಪ್ರೊಜೆಕ್ಟ ಸಾಧಕ ಬಾಧಕಗಳನ್ನು ಚರ್ಚಿಸಿ ಬೇಡಿಕೆಗೆ ಅನುಮೋದನೆ ನೀಡಿದ್ದಾರೆ .

ಹೀಗೆ ಆ ಸಂದರ್ಭದಲ್ಲಿ ಎಲ್ಲಾ ಕಾನೂನು ನಿಯಮಗಳನ್ನು ಪಾಲಿಸಿ ಭೂಮಿ ಮಂಜೂರಾತಿ ಮಾಡಲಾಗಿದ್ದು ಅದರಲ್ಲಿ ಕೈಗಾರಿಕಾ ಸಚಿವರ ಮತ್ತು ಹಿರಿಯ ಅಧಿಕಾರಿಗಳಿಂದ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ ಮತ್ತು ಪರವಾಗಿ ಕೆಲಸ ಮಾಡಿಲ್ಲವೆಂದು ಈ ಮೂಲಕ ನಾನು ಸ್ಪಷ್ಟಪಡಿಸುತ್ತೇನೆ. ಈ ಕುರಿತು ಏನಾದರೂ ಸಮಸ್ಯೆಗಳಿದ್ದರೆ ನನ್ನನ್ನು ಸಂಪರ್ಕಿಸಬಹುದು ಸ್ಪಷ್ಟೀಕರಣ ನೀಡಲು ಸದಾ ನಾನು ಸಿದ್ಧನಿದ್ದೇನೆ ಎಂದು ನಿರಾಣಿ ಹೇಳಿದರು

Related Articles

Leave a Reply

Your email address will not be published. Required fields are marked *

Back to top button