ಚಿಕ್ಕೋಡಿಬೆಳಗಾವಿ

ಉಮರಾಣಿ ಗ್ರಾಮದ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವ ಮೇ 6 ರಿಂದ ಜರುಗಲಿದೆ.

ಚಿಕ್ಕೋಡಿ:ಉಮರಾಣಿ ಗ್ರಾಮದ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವು ಮೇ 6 ರಿಂದ 9 ವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾಕಮೀಟಿಯ ಸದಸ್ಯರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಶ್ರೀಆದಿಶಕ್ತಿ,ಜಗನ್ಮಾತೆ,ಮಹಾತಾಯಿ,ಜಾಗೃತದೇವಿ,ಮಹಾಶಕ್ತಿ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವ ಮೇ 6 ರಂದು ಪ್ರಾರಂಭವಾಗಲಿದೆ.ಅದೇ ದಿನ ರಾತ್ರಿ 8 ಗಂಟೆಗೆ ದೇವಿಗೆ ಸೀರೆ ಏರಿಸುವುದು,ಉಡಿತುಂಬುವುದು,ನೈವ್ಯದ್ಯ,ಹಾಗೂ ಕರಿಕಟ್ಟುವುದು ಬಳಿಕ ರಾತ್ರಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ‌.ಮೇ 7 ರಂದು ಮುಂಜಾನೆ 6 ಗಂಟೆಗೆ ವಿಧಿ ವಿಧಾನ ಪ್ರಕಾರ ಪೂಜೆ,ಮಧ್ಯಾಹ್ನ 12 ಗಂಟೆಗೆ ಶ್ರೀ ಭಾವೇಶ್ವರಿದೇವಿಯ ಪಲ್ಲಕಿ ಮೆರವಣಿಗೆ ,ಶೆಹನಾಯಿ ವಾದ್ಯ ಸೇವೆ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.ರಾತ್ರಿ 10.30 ಕ್ಕೆ ಹೆಣ್ಣು ಸಂಸಾರದ ಕಣ್ಣು ಅರ್ಥಾತ್ ಮನೆ ಬೆಳಗಿದ ಮುತೈದೆ ನಾಟಕ ಪ್ರದರ್ಶನಗೊಳ್ಳಲಿದೆ.

ಮೇ 8 ರಂದು ಮುಂಜಾನೆ 10 ಗಂಟೆಗೆ ಜನರಲ್ 1 ಕುದುರೆ ಹಲ್ಲು ಹಚ್ಚದ 1 ಕುದುರೆ ಗಾಡಿ ಶರ್ಯತ್ತು, 10.30 ಕ್ಕೆ ಜೋಡು ಕುದುರೆ ಗಾಡಿ ಶರ್ಯತ್ತು,11 ಗಂಟೆಗೆ ಕುದುರೆ ಶರ್ಯತ್ತು,11.15 ಕ್ಕೆ ಜೋಡೆತ್ತಿನ ಗಾಡಿ ಶರ್ಯತ್ತುಗಳು ನಡೆಯಲಿದೆ.ರಾತ್ರಿ 9.30 ಕ್ಕೆ ಗರತಿ ಹೆಣ್ಣಿಗೆ ಗರ್ವದ ಗಂಡ ಎನ್ನುವ ನಾಟಕ ಹಾಗೂ ಮೇ 9 ರಂದು ರಾತ್ರಿ 10.30 ಕ್ಕೆ ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರಕಾರ ನಾಟಕ ಜರುಗಲಿದೆ.ಮೂರು ದಿನಗಳ ಕಾಲ ಜರುಗುವ ಜಾತ್ರಾಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಜಾತ್ರಾಮಹೋತ್ಸವ ಕಮಿಟಿಯ ಸದಸ್ಯರು ಮನವಿಯನ್ನು ‌ಮಾಡಿಕೊಂಡಿದ್ದಾರೆ.

ಈ‌ ಸಂದರ್ಭದಲ್ಲಿ ಪರಗೌಡ ಪಾಟೀಲ, ರುದ್ರಗೌಡ ಪಾಟೀಲ, ಕೇದಾರಗೌಡ ಪಾಟೀಲ, ಬಸಗೌಡ ಪಾಟೀಲ, ಗಜಾನನ ಪಾಟೀಲ, ಮಹಾಂತೇಶ ಪಾಟೀಲ, ಚಿದಾನಂದ ಪಾಟೀಲ, ಮಲ್ಲಗೌಡ ಪಾಟೀಲ, ಶ್ರೀನಾಥ ಪಾಟೀಲ, ಮಹಾದೇವ ಪಾಟೀಲ,ಸಂತೋಷ ಪಾಟೀಲ ಸೇರಿದಂತೆ ಜಾತ್ರಾ ಕಮೀಟಿಯ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button