ಬೆಳಗಾವಿ

K.L.E.ಆಸ್ಪತ್ರೆಯ ಹತ್ತಿರದ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ ಖದೀಮನನ್ನು ಖೇಡ್ಡಾಕ್ಕೆ ಕೆಡುವಿದ ಬೆಳಗಾವಿ ಪೊಲೀಸರು

ಬೆಳಗಾವಿ ನಗರದ ಕೆ ಎಲ್ ಇ ಆಸ್ಪತ್ರೆಯ ಹತ್ತಿರದ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ ಖದೀಮನನ್ನು ಬೆಳಗಾವಿ ಪೊಲೀಸರು ಖೇಡ್ಡಾಕ್ಕೆ ಕೆಡುವಿದ್ದಾರೆ.

ಬೆಳಗಾವಿ ವೈಭವ ನಗರದ ರಹಿವಾಸಿ ಇರ್ಫಾನ್ ರಫೀಕ್ ಶೇಖ್ ಎಂಬಾತ ಕೆಎಲ್ಇ ಆಸ್ಪತ್ರೆಯ ಹತ್ತಿರ ಸಂಶಯ ಆಸ್ಪದವಾಗಿ ತಿರುಗಾಡುತ್ತಿದ್ದಾಗ ಎಪಿಎಂಸಿ ಪೊಲೀಸರು ವಿಚಾರಣೆ ಮಾಡಿದಾಗ 1,75,000 ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ನಗರದ ವಿವಿಧ ಕಡೆಯಿಂದ ಕಳುವು ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.

ಪೊಲೀಸ್ ಇನ್ಸ್ಪೆಕ್ಟರ್ ಯುಎಸ್ ಅವಟಿ, ಪಿಎಸ್ಐ ಮಂಜುನಾಥ ಭಜಂತ್ರಿ ತ್ರಿವೇಣಿ ನಾಟಿಕಾರ್, ಸಂತೋಷ ದಳವಾಯಿ ಬಿಕೆ ಮೀಟಗಾರ್, ಬಿ ಎಂ ನರಗುಂದ, ಖಾದರ್ ಖಾನಮ್ಮನವರ, ಗೋವಿಂದ ಪೂಜಾರಿ ಡಿಸಿ ಸಾಗರ್, ಕೆಂಪಣ್ಣ ಖಾನಾಪುರಿ ಕುಮಾರ ಲಮಾಣಿ ಇನ್ನುಳಿದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button