Uncategorized

ಕೊಲೆ ನಡೆದ ಸ್ಥಳದಲ್ಲಿ ಆರೋಪಿ ದರ್ಶನ್ ಇದ್ದ Photo ಪೊಲೀಸರ ಕೈಗೆ.!

ಕೊಲೆ ನಡೆದ ಸ್ಥಳದಲ್ಲಿ ಆರೋಪಿ ದರ್ಶನ್ ಇದ್ದ Photo ಪೊಲೀಸರ ಕೈಗೆ.!

ಬೆಂಗಳೂರು : ನಟ ದರ್ಶನ್​ಗೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (murder case) ದೊಡ್ಡ ಸಂಕಷ್ಟವೇ ಎದುರಾಗಿದೆ. ಪೊಲೀಸರು ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಕೋರ್ಟ್​ಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

ಚಾರ್ಜ್​ಶೀಟ್​ನಲ್ಲಿ ಮತ್ತೆರಡು ಫೋಟೋ ಸಾಕ್ಷಿಗಳನ್ನು ಪೊಲೀಸರು ಸೇರಿಸಿದ್ದಾರೆ ಎನ್ನಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ (eyewitnesses) ಮೊಬೈಲ್​ನಿಂದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಸದ್ಯ ಕೊಲೆ ನಡೆದ ಸ್ಥಳದಲ್ಲಿ ತೆಗೆದ ಫೋಟೋ ರಿಕವರಿ ಮಾಡಲಾಗಿದ್ದು, ಸ್ಥಳದಲ್ಲಿ ದರ್ಶನ್ ನಿಂತಿರುವ ಫೋಟೋ ಕೂಡ ಸಿಕ್ಕಿದೆ ಎನ್ನಲಾಗಿದೆ.

ಪಟ್ಟಣಗೆರೆ ಶೆಡ್​​ನಲ್ಲಿ ದರ್ಶನ್ ನಿಂತಿರುವ ಫೋಟೋವನ್ನು ಇದೀಗ retrive​​ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ದರ್ಶನ್​ ಕೂಡ ಇದ್ದರು ಎಂಬುದಕ್ಕೆ ಈ 2 ಫೋಟೋಗಳು ಸಾಕ್ಷಿಯಾಗಲಿವೆ (witness).

ಇಂದು ದರ್ಶನ್ ಬೇಲ್ ಅರ್ಜಿ ವಿಚಾರಣೆ (Application hearing) ನಡೆಯಲಿದೆ. ಇದೀಗ ಫೋಟೋ ಹೊರಬಿದ್ದಿದ್ದು, ಈ ಫೋಟೋಗಳು ದರ್ಶನ್​ಗೆ ದೊಡ್ಡ ಸಂಕಷ್ಟ ತಂದೊಡ್ಡಲಿವೆ.

Related Articles

Leave a Reply

Your email address will not be published. Required fields are marked *

Back to top button