ಮಾನ್ವಿಯಲ್ಲಿ ಕಾಂಗ್ರೇಸ್,ಬಿಜೆಪಿ ಕಾರ್ಯಕರ್ತರ ನಡುವೆ ಕೈ ಕೈ ಗುದ್ದಾಟ. ಮಾನ್ವಿ ಪಟ್ಟಣದ ಬಸವ ವೃತ್ತದಿಂದ ನಡೆಯುವ ಸಿ.ಸಿ. ರಸ್ತೆ ಕಾಮಗಾರಿ ಗೊಂದಲದ ಗೂಡು.

ಮಾನ್ವಿಯಲ್ಲಿ ಕಾಂಗ್ರೇಸ್,ಬಿಜೆಪಿ ಕಾರ್ಯಕರ್ತರ ನಡುವೆ ಕೈ ಕೈ ಗುದ್ದಾಟ.
ಮಾನ್ವಿ ಪಟ್ಟಣದ ಬಸವ ವೃತ್ತದಿಂದ ನಡೆಯುವ ಸಿ.ಸಿ. ರಸ್ತೆ ಕಾಮಗಾರಿ ಗೊಂದಲದ ಗೂಡು.
ಮಾಜಿ ಶಾಸಕ ಗಂಗಾಧರನಾಯಕ ಕಾಮಗಾರಿ ಸ್ಥಳಕ್ಕೆ ಭೇಟಿ , ಆಕ್ರೋಶ
ಎಸ್ಸಿ,ಎಸ್ಟಿ ಅನುದಾನ ರಸ್ತೆ ಕಾಮಗಾರಿಗೆ ಬಳಕೆ ಎಂದು ಬಿಜೆಪಿ ಮುಖಂಡರ ಆರೋಪ.
ಲೋಕೋಪಯೋಗಿ ಇಲಾಖೆ ಎಇಇ ಸಾಮುವೇಲಪ್ಪನ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ.
1ಕೋಟಿ ಅನುದಾನ ಕಳಪೆ ಕಾಮಗಾರಿ ಮೂಲಕ ಎತ್ತುವಳಿ ಹುನ್ನಾರ ನಡೆದಿದೆ ಎಂದು ಆರೋಪ.
ಮಾನ್ವಿ ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ 1ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ಕಾಮಗಾರಿ ಒಂದು ರೀತಿಯಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಕಾರ್ಯಕರ್ತರ ಹಗ್ಗಾಜಗ್ಗಾಟದಿಂದ ಗೊಂದಲದ ಗೂಡಾಗಿದೆ.
ಗುಣಮಟ್ಟದಲ್ಲಿರುವ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಮಾಡಿ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕ ಗಂಗಾಧರನಾಯಕ ಸ್ಥಳಕ್ಕೆ ಭೇಟಿ ನೀಡಿ ಮಾನ್ವಿ ಲೋಕೋಪಯೋಗಿ ಇಲಾಖೆ ಎಇಇ ಸಾಮುವೇಲಪ್ಪ ಹಾಗು ತಾಲೂಕು ದಂಡಾಧಿಕಾರಿಗೆ ಕರೆ ಮಾಡಿ ಎಸ್ಸಿ ಎಸ್ಟಿ ಅನುದಾನ ದುರ್ಬಳಕೆ ಮಾಡುವುದು ಸರಿಯಲ್ಲ ಎಂದು ಗುಡುಗಿದರು
ಪ್ರಸ್ತುತ ಇರುವ ರಸ್ತೆ ಗುಣಮಟ್ಟದಲ್ಲಿದ್ದರು ಮತ್ತೊಮ್ಮೆ ಒಂದು ಕೋಟಿ ರುಪಾಯಿ ಕೆಕೆಆರ್ ಡಿಬಿಯ ಎಸ್ಸಿ ಎಸ್ಟಿ ಜನಾಂಗದಲ್ಲಿ ಬಳಸಬೇಕಾದ ಅನುದಾನವನ್ನು ಲೋಕೋಪಯೋಗಿ ಇಲಾಖೆ ಅಭಿಯಂತರರು ಪಟ್ಟಣದ ರಸ್ತೆಗೆ ಬಳಕೆ ಮಾಡುತ್ತಿರುವುದು ಅನ್ಯಾಯ ಮಾನ್ವಿಯಲ್ಲಿ ಕಾನೂನು ಅನ್ನೋದು ಇದೇನಾ ಎಂದು ಕಿಡಿಕಾರಿದರು.