ರಾಜಕೀಯರಾಜ್ಯ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ – ಮಹಾರಾಷ್ಟ್ರ ಗಡಿ ವಿವಾದವನ್ನು ಪ್ರಸ್ತಾಪ ಮಾಡಬೇಕು ಬೆಳಗಾವಿ ಮರಾಠಿಗರಿಗೆ ಮನವಿ ಮಾಡಿದ್ದು ದುರ್ದೈವದ ಸಂಗತಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ – ಮಹಾರಾಷ್ಟ್ರ ಗಡಿ ವಿವಾದವನ್ನು ಪ್ರಸ್ತಾಪ ಮಾಡಬೇಕು ಬೆಳಗಾವಿ ಮರಾಠಿಗರಿಗೆ ಮನವಿ ಮಾಡಿದ್ದು ದುರ್ದೈವದ ಸಂಗತಿ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು‌. ಈಗಾಗಲೇ ಬೆಳಗಾವಿ- ಮಹಾರಾಷ್ಟ್ರ ಗಡಿ ವಿವಾದ ನ್ಯಾಯಾಲಯದಲ್ಲಿದೆ. ನ್ಯಾಯಾಲಯಕ್ಕೆ ಹೋಗಿದ್ದೆ ಮಹಾರಾಷ್ಟ್ರದವರು ಬೆಳಗಾವಿ ಸಹಿತ ಕರ್ನಾಟಕದ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇನ್ನೊಂದೆಡೆ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ ಎರಡೂ ಏಕಕಾಲಕ್ಕೆ ‌ಮಾಡುವುದು ಸರಿಯಲ್ಲ ಎಂದರು.

ಮಹಾರಾಷ್ಟ್ರ ಮಾಡುವ ಕುತಂತ್ರವನ್ನು ಕರ್ನಾಟಕ ರಾಜ್ಯ ಸರಕಾರ ನ್ಯಾಯಾಂಗ ‌ನಿಂಧನೆ ಪ್ರಕರಣ ಹಾಕಬೇಕು. ಎಂಇಎಸ್ ದವರು ಬೀದಿಯಲ್ಲಿ ನಿಂತು ಹೋರಾಟ ಮಾಡುವುದಾದರೆ ನ್ಯಾಯಾಲಯಕ್ಕೆ ಹೂಡಿದ ದಾವೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮಹಾರಾಷ್ಟ್ರ ಚುನಾವಣೆಯಲ್ಲಿ ಸಾಕಷ್ಟು ವಿಷಯ ಇದೆ. ಅದರ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ಎಂಇಎಸ್ ನವರು ಸಲ್ಲಿಸುತ್ತಿರುವ ಬೇಡಿಕೆಗೆ ಯಾವುದೇ ಮನ್ನಣೆ ಕೊಡಬಾರದು ಎಂದರು.

Related Articles

Leave a Reply

Your email address will not be published. Required fields are marked *

Back to top button