Uncategorized
ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ.

ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ.
ಗೋಕಾಕ : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಲಕ್ಷ್ಮೀ ಎಜುಕೇಷನ್ ಸಂಸ್ಥೆಯ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಮಹಾದೇವ ಖಾನಟ್ಟಿ, ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ ವ್ಯವಸ್ಥಾಪಕ ನಿರ್ದೇಶಕರಾದ ಸನತ್ ಜಾರಕಿಹೊಳಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುಭಾಸ. ಜಿ. ಬಿರಾದರ ಪಾಟೀಲ, ಎಸ್.ಎಲ್.ಜೆ ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯರಾದ ಜಿ, ಆರ್, ನೀಡೋಣಿ, ಉಪನ್ಯಾಸಕರಾದ ಎಸ್. ಸಿ. ಘಟವಾಳಮಠ, ಆರ್. ಎಚ್. ಇಟ್ನಾಳ, ಶ್ರೀಮತಿ ಪಿ. ಬಿ. ನಿಂಬಾಳರ ಶ್ರೀಮತಿ ಎಸ್. ಎಮ್. ಮುಲ್ಲಾ, ಬಿ. ಡಿ. ಕುಲಕರ್ಣಿ, ಎಮ್. ಆರ್. ಧವನ, ಹಾಗೂ ಹಿರಿಯ ವಕೀಲರಾದ ಗುರು ಪೂಜೇರಿ, ಸೂರ್ಯಕಾಂತ ಪಾಟೀಲ್ ಹಾಗೂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು



