
ಮಾನ್ವಿಯಲ್ಲಿ ದಸರಾ ಮಹೋತ್ಸವ ನಿಮಿತ್ತ ಅಂಬಾರಿ ಮೆರವಣಿಗೆ
ಮಕ್ಕಳು, ಮಹಿಳೆಯರಿಂದ ಕುಂಭ ಮೆರವಣಿಗೆ
ಕಳೆದ 45 ವರ್ಷದಿಂದ ನಡೆಯುತ್ತೆ ಅಂಭಾರಿ ಮೆರವಣಿಗೆ
ಮಾನ್ವಿ ಪಟ್ಟಣದಾದ್ಯಂತ ಮೆರಗು ತಂದ ಮೆರವಣಿಗೆ
ಮೆರವಣಿಗೆಯಲ್ಲಿ ರಾಜಕಾರಣಿಗಳು ಭಾಗಿ
ಮೈಸೂರಿನಲ್ಲಿ ದಸರಾ ಅಂಭಾರಿ ನೋಡುವುದೆ ಚೆಂದ.ಅದೆ ರೀತಿಯಲ್ಲಿ ಮೈಸೂರು ದಸರಾ ಮಹೋತ್ಸವದ ನಿಮಿತ್ತ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಕಳೆದ 45 ವರ್ಷದಿಂದ ಬೃಹನ್ಮಠ ಕಲ್ಮಠ ಮಠದಿಂದ ಅಂಭಾರಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಪುಠಾಣಿ ಮಕ್ಕಳು ಹಾಗು ಮಹಿಳೆಯರಿಂದ ಸಾವಿರಾರು ಸಂಖ್ಯೆಯಲ್ಲಿ ಕಳಸ ಮೆರವಣಿಗೆ ನಡೆದರೆ, ಡೊಳ್ಳು ಕುಣಿತ, ತಾಷಾ ಹಾಗು ಡಿಜೆ ಸೌಂಡ್ ಗೆ ಪುಠಾಣಿಗಳು ಕುಣಿದು ಕುಪ್ಪಳಿಸಿದರು.
ಮೆರವಣಿಗೆಯಲ್ಲಿ ರಾಜಕಾರಣಿಗಳು ಹಾಗು ಸ್ವಾಮೀಜಿಗಳು ಭಾಗಿಯಾಗಿದ್ದರೆ,ಭಕ್ತರಿಗೆ ಕಲ್ಮಠ ಮಠದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.