Uncategorized
ಕಳ್ಳ ಸಂಬಂಧಕ್ಕೆ ಅಡ್ಡಿಯಾದ ಬಾವನಿಗೆ ಚಟ್ಟ ಕಟ್ಟಿದ ನಾದಿನಿ! ಚಿತ್ರದುರ್ಗದಲ್ಲಿ ನಡೆದ ಭೀಕರ ಹತ್ಯೆಯ ಅಸಲಿ ಕಥೆ

ಕಳ್ಳ ಸಂಬಂಧಕ್ಕೆ ಅಡ್ಡಿಯಾದ ಬಾವನಿಗೆ ಚಟ್ಟ ಕಟ್ಟಿದ ನಾದಿನಿ! ಚಿತ್ರದುರ್ಗದಲ್ಲಿ ನಡೆದ ಭೀಕರ ಹತ್ಯೆಯ ಅಸಲಿ ಕಥೆ
ಕಣ್ಣಿಗೆ ಕಾಮದ ಪೊರೆ ಮುಚ್ಚಿದರೆ ಮನುಷ್ಯ ಎಂತೆಂಥಾ ದ್ರೋಹಕ್ಕೆ ಮುಂದಾಗುತ್ತಾನೆ ನೋಡಿ! ರಕ್ತಸಂಬಂಧ, ನಂಬಿಕೆ, ವಿಶ್ವಾಸ ಎಲ್ಲವನ್ನೂ ಗಾಳಿಗೆ ತೂರಿ ಪರಪುರುಷನ ಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ತನ್ನ ಕಳ್ಳಾಟಕ್ಕೆ ಅಡ್ಡಿಯಾದ ಸ್ವಂತ ಬಾವನನ್ನೇ ಮುಗಿಸಿ ಜೈಲು ಕಂಬಿ ಎಣಿಸುತ್ತಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದಲ್ಲಿ ನಡೆದ ಈ ಘಟನೆ ಈಗ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.
ಆರೋಪಿ ಸುಮತಿಗೆ ಮದುವೆಯಾಗಿ ಸುಂದರವಾದ ಸಂಸಾರವಿತ್ತು. ಆದರೆ ಈಕೆ ಚಿತ್ರದುರ್ಗದ ನೂರ್ ಅಹ್ಮದ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಹೆಲ್ತ್ ಇನ್ಸ್ಪೆಕ್ಟರ್ ಆಗಿದ್ದ ಸುಮತಿಯ ಬಾವ (ಗಂಡನ ಅಣ್ಣ) ಶಿವಮೂರ್ತಿಗೆ ಈ ವಿಷಯ ತಿಳಿದುಬಂದಿತ್ತು. ತಮ್ಮನ ಸಂಸಾರ ಹಾಳಾಗಬಾರದು ಎಂಬ ಒಂದೇ ಒಂದು ಒಳ್ಳೆಯ ಉದ್ದೇಶದಿಂದ ಶಿವಮೂರ್ತಿ ನಾದಿನಿಗೆ ಬೈದು ಬುದ್ಧಿ ಹೇಳಿದ್ದಲ್ಲದೆ, ನೂರ್ ಅಹ್ಮದ್ಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದ.
ಯಾವಾಗ ಬಾವ ಶಿವಮೂರ್ತಿ ತಮ್ಮ ಪ್ರೀತಿಯ ಮಧ್ಯೆ ಕಂಟಕನಾಗಿ ನಿಂತನೋ, ಆತನನ್ನು ಜಗತ್ತಿನಿಂದಲೇ ಮುಗಿಸಲು ಈ ಜೋಡಿ ಸಂಚು ರೂಪಿಸಿತು. ಶಿವಮೂರ್ತಿ ಅವರು ಬಿಡುವಿನ ವೇಳೆಯಲ್ಲಿ ತಮಗಿದ್ದ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಬಾಡಿಗೆ ಕಾರು ಬೇಕೆಂದು ಹೇಳಿ ಶಿವಮೂರ್ತಿಯನ್ನು ಕರೆಸಿಕೊಂಡಿದ್ದಾರೆ. ತದನಂತರ ಹಾದಿಮಧ್ಯೆ ಅವರನ್ನು ಕಿಡ್ನ್ಯಾಪ್ ಮಾಡಿ ಕ್ರೂರವಾಗಿ ಹತ್ಯೆಗೈದಿದ್ದಾರೆ. ಸಾಕ್ಷ್ಯ ನಾಶಪಡಿಸಲು ಶವವನ್ನು ಇಂಗಳದಾಳ್ ಲಂಬಾಣಿಹಟ್ಟಿ ಬಳಿ ಎಸೆದು ಪರಾರಿಯಾಗಿದ್ದರು.
ಶಿವಮೂರ್ತಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಮೊದಲು ನೂರ್ ಅಹ್ಮದ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ, ಕೊಲೆಯ ಹಿಂದಿದ್ದ ಮಾಸ್ಟರ್ ಮೈಂಡ್ ಸುಮತಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಇಬ್ಬರನ್ನೂ ಈಗ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಬಂಗಾರದಂತಹ ಸಂಸಾರವನ್ನು ತಾನೇ ಕೈಯಾರೆ ಹಾಳುಮಾಡಿಕೊಂಡು, ಪರಪುರುಷನ ತೆಕ್ಕೆಗೆ ಬಿದ್ದ ಈ ಸುಪನಾತಿ ಸುಮತಿ, ಇವತ್ತು ಅಮಾಯಕ ಬಾವನ ಸಾವಿಗೆ ಕಾರಣವಾಗಿ ಕಟಕಟೆಯಲ್ಲಿ ನಿಂತಿದ್ದಾಳೆ.



