ರಾಜಕೀಯರಾಜ್ಯ

ತಿಲಕವಾಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮಾರಕಾಸ್ತ್ರ ಹೊಂದಿದ್ದ ಓರ್ವ ಆರೋಪಿಯ ಬಂಧನ

ಬೆಳಗಾವಿ: ತಿಲಕವಾಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮಾರಕಾಸ್ತ್ರ ಹೊಂದಿದ್ದ ಓರ್ವ ಆರೋಪಿಯ ಬಂಧನ
• ತಿಲಕವಾಡಿ ಪೊಲೀಸರಿಂದ ಓರ್ವ ಆರೋಪಿಯ ಬಂಧನ
• ಆರ್‌ಪಿಡಿ ಕ್ರಾಸ್ ಬಳಿ ಪೊಲೀಸರ ದಾಳಿ
• ಅಪಾಯಕಾರಿ ಚಾಕು ಮತ್ತು ಪಂಚ್ ಜಪ್ತಿ
• ಪಿಐ ಪರುಶರಾಮ ಪೂಜೇರಿ ತಂಡಕ್ಕೆ ಶ್ಲಾಘನೆ
ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮಾರಕಾಸ್ತ್ರಗಳನ್ನು ಹೊಂದಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರ್‌ಪಿಡಿ ಕ್ರಾಸ್ ಹತ್ತಿರ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದ್ದು, ಪೊಲೀಸರು ಮಹತ್ವದ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬೆಳಗಾವಿಯ ಆರ್‌ಪಿಡಿ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಕಬ್ಬಿಣದ ಚಾಕು ಮತ್ತು ಕಬ್ಬಿಣದ ಮುಷ್ಟಿ (ಪಂಚ್) ಇಟ್ಟುಕೊಂಡಿದ್ದ ಮಹಾದ್ವಾರ ರಸ್ತೆ ನಿವಾಸಿ ವೈಭವ ಮಹಾದೇವ ಪೋಠೆ (24) ಎಂಬಾತನನ್ನು ತಿಲಕವಾಡಿ ಠಾಣೆಯ ಪಿಐ ಪರುಶರಾಮ ಪೂಜೇರಿ ಹಾಗೂ ಅವರ ಸಿಬ್ಬಂದಿ ತಂಡ ಯಶಸ್ವಿಯಾಗಿ ವಶಕ್ಕೆ ಪಡೆದಿದೆ. ಬಂಧಿತ ಆರೋಪಿಯ ವಿರುದ್ಧ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ಹಾಗೂ ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button