ಸುಮಾರು 40ಲಕ್ಷ ಅನುದಾನದಲ್ಲಿ ಪರಮಾನಂದವಾಡಿ ಪಂಚಾಯತಿ ಕಾರ್ಯಾಲಯಕ್ಕೆ ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜಿ ಚಾಲನೆ.

ಕುಡಚಿ : ರಾಯಬಾಗ ತಾಲೂಕೀನ ಪರಮಾನಂದವಾಡಿ ಗ್ರಾಮದ ನೀರು ಶುದ್ದಿಕರಣ ಘಟಕದ ಬಳಿ ನೂತನ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಚಾಲನೆ ನೀಡಿದರು.
ಕೇಂದ್ರ ಸರಕಾರದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 20 ಲಕ್ಷರೂಪಾಯಿ ಹಾಗೂ ಎಸ್ಕ್ರೋ ಅನುದಾನದಡಿಯಲ್ಲಿ 19 ಲಕ್ಷ 35 ಸಾವಿರ ಒಟ್ಟು 39 ಲಕ್ಷ 35 ಸಾವಿರ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಗೊಳ್ಳಲಿದೆ.
ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಭೂಮಿ ಪೂಜೆಯನ್ನು ಪರಮಾನಂದವಾಡಿ ಗ್ರಾಮದ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ಪೀಠಾದಿಪತಿ ಡಾ// ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮತ್ತು ಹಡಿಗಿನ್ಯಾಳ ಗ್ರಾಮದ ಮುತ್ತೇಶ್ವರ ಸ್ವಾಮೀಜಿ ಹಾಗೂ ಮಬನೂರ ಗ್ರಾಮದ ಬಸವರಾಜ ಸ್ವಾಮೀಜಿ, ಪಿಡಿಒ ಉಮೇಶ ಪೋಳ, ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷ ದಶರಥ ಕುರಣೆ, ಉಪಾಧ್ಯಕ್ಷ ಸೈದಾಬಿ ಸೈಯ್ಯದ, ಹಿರಿಯ ಧುರೀಣರಾದ ಬಸವರಾಜ ಸನದಿ, ತಾಲುಕಾ ಪಂಚಾಯತಿ ಮಾಜಿ ಸದಸ್ಯ ಸಾತಪ್ಪಾ ಅಂಬಿ, ನಿಂಗಪ್ಪಾ ಮರಗ್ಗನ್ನವರ್ , ಸಂಜು ಬಾಂಡಿ, ಗ್ರಾಮ ಪಂಚಾಯತಿ ಸದಸ್ಯರಾದ ಪದ್ಮಣಾ ಮಿರ್ಜೆ ,ದೀಲಿಪ್ ಗಂಡೋಸಿ, ಸಲೀಮ ಮುಲ್ಲಾ, ಮಹಾವೀರ ಚಂಡಕೆ, ಬಾದಶಾ ಡಾಂಗೆ, ಫಾಕೀಜಾ ಜಮಾದರ, ಇಂಜನಿಯರ್ ಅಬ್ಬುಬಕರ್ ದಾಡಿವಾಲೆ, ಗುತ್ತಿಗೆದಾರ ಶ್ರೀಧರ ಶೇಲಾರ. ಉಪಸ್ಥಿತರಿದ್ದರು,