Uncategorized
ಕಾಂಕ್ರೀಟ್ ಪಿಲ್ಲರ್ ನಡುವೆ ಸಿಲುಕಿ ಒದ್ದಾಡುತ್ತಿದ್ದ ಒಂಟಿ ಸಲಗ ಜೆಸಿಬಿ ಸಹಾಯದಿಂದ ರಕ್ಷಣೆ.

ಕಾಂಕ್ರೀಟ್ ಪಿಲ್ಲರ್ ನಡುವೆ ಸಿಲುಕಿ ಒದ್ದಾಡುತ್ತಿದ್ದ ಒಂಟಿ ಸಲಗ ಜೆಸಿಬಿ ಸಹಾಯದಿಂದ ರಕ್ಷಣೆ. ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ.
ವಾಪಸ್ ಕಾಡಿಗೆ ತೆರಳುತ್ತಿದ್ದಾಗ ಕಾಂಕ್ರೀಟ್ ಪಿಲ್ಲರ್ಗೆ ಸಿಲುಕಿದ್ದ ಆನೆ.
ಹುಣಸೂರು ತಾಲೂಕು ಮುದುಗನೂರು ಹೊಸಕೆರೆ ಬಳಿ ಸಿಲುಕಿದ್ದ ಆನೆ.
ನಾಗರಹೊಳೆ ಅಭಯಾರಣ್ಯದಿಂದ ನಾಡಿಗೆ ಬಂದಿದ್ದ ಒಂಟಿಸಲಗ.
ವಾಪಸ್ಸು ಹೋಗುವ ವೇಳೆ ಆನೆ ತಡೆಗೆ ಹಾಕಿದ್ದ ಕಾಂಕ್ರೀಟ್ ಪಿಲ್ಲರ್ಗೆ ಸಿಲುಕಿದ್ದ ಆನೆ. ಸುಮಾರು ಮೂರು ಗಂಟೆಗಳ ಕಾಲ ಹೊರಬರಲಾಗದೇ ನರಳಾಡಿದ್ದ ಕಾಡಾನೆ.
ಕಾಡಾನೆ ಕಾಂಕ್ರೀಟ್ ಪಿಲ್ಲರ್ಗೆ ಸಿಲುಕಿದ್ದನ್ನ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ಸ್ಥಳೀಯರು. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ. ಜೆಸಿಬಿ ಯಂತ್ರದ ಸಹಾಯದಿಂದ ಕಾಡಾನೆ ರಕ್ಷಣೆ. ಈ ಹಿಂದೆ ಕಾಡಿನಿಂದ ನಾಡಿಗೆ ಬಂದಿದ್ದ ಒಂಟಿಸಲಗ.
ಪದೇ ಪದೇ ಬಂದು ಬೆಳೆ ನಾಶ ಮಾಡುತ್ತಿದ್ದ ಆನೆ. ಈ ಹಿನ್ನೆಲೆಯಲ್ಲಿ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು.