ಬಾಗಲಕೋಟೆ

ಬಾಗಲಕೋಟೆ ಮಣ್ಣು ಮಾಫಿಯಾಗೆ ಅನುಮತಿ ನೀಡಿದ್ದೇನೆ ಎಂದು ಹೇಳಿದ್ದಕ್ಕಾಗಿ ಗಣಿ ಡಿಡಿ ಸಂಕಷ್ಟದಲ್ಲಿದ್ದಾರೆ..!

ಬಾಗಲಕೋಟ: ಅಕ್ರಮ ಭೂ ಕಬಳಿಕೆದಾರರಿಗೆ ಗಣಿ ಮತ್ತು ಪೊಲೀಸ್ ಅಧಿಕಾರಿಗಳು ಬೆಂಬಲ ನೀಡಿದ್ದಾರೆಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಡಿಡಿ ರೇಷ್ಮಾ ಅವರ ಸುತ್ತವೇ ಅನುಮಾನಗಳು ಮೂಡುತ್ತಿವೆ
ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಬಳಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಗಣಿಗಾರಿಕೆಗೆ ಅನುಮತಿ ನೀಡಿದ್ದರೆ, ಅಕ್ರಮ ಮಣ್ಣು ಸಾಗಣೆಗಾಗಿ ಟಿಪ್ಪರ್ ವಿರುದ್ಧ ಪ್ರಕರಣ ದಾಖಲಿಸಿದ್ದು ಏಕೆ ನಿಯಮಗಳನ್ನು ಉಲ್ಲಂಘಿಸಿ ರಾತ್ರಿ ವೇಳೆ ಮಣ್ಣು ಗಣಿಗಾರಿಕೆ ನಡೆಸಿದ್ದು ಏಕೆ ಎಂಬ ಅನುಮಾನಗಳು ಮೂಡುತ್ತಿವೆ.

ಆದರೆ ರೈತರ ಪಟ್ಟಾ ಭೂಮಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ ಎಂದು ಇಲಾಖೆ ಉಪ ನಿರ್ದೇಶಕ ರೇಷ್ಮಾ ಅವರು ಇನ್ನು ನ್ಯೂಸ್ ಗೆ ಮಾಹಿತಿ ನೀಡಿದರು. ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಈಗಾಗಲೇ ಕೆಲವು ಟಿಪ್ಪರ್ ಗಳಿಗೆ ತಂಡ ವಿಧಿಸಲಾಗಿದೆ ಎಂದರು

ಮಣ್ಣು ಮಾಫಿಯಾದಲ್ಲಿ ಪೊಲೀಸರು ಟಿಪ್ಪರ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸದಿದ್ದು ಏಕೆ ಮಣ್ಣು ಮಾಫಿಯಾದಲ್ಲಿ ಶಮಿಲಾದ್ರಾ ಪೊಲೀಸ್ ಮತ್ತು ಗಣಿ ಅಕ್ರಮ ಅಧಿಕಾರಿಗಳು. ಜಪ್ತಿ ಮಾಡಿದ ಅಕ್ರಮ ಮಣ್ಣು ಸಾಗಣೆ ಟಿಪ್ಪರ್ ಅನ್ನು ಲೋಕಾಪುರ ಪಿಎಸ್ಐ ಬಿಡುಗಡೆ ಮಾಡಿದ್ದಾರೆಯೇ?

ಗಣಿ ಮತ್ತು ವಿಜ್ಞಾನ ಇಲಾಖೆಗೆ ಮಾಹಿತಿ ನೀಡದೆ ಪಿಎಸ್ಐ ಧೈರ್ಯ ಪ್ರದರ್ಶಿಸಿದ್ದಾರಾ?..
ಲೋಕಾಪುರ ಪೊಲೀಸರ ಮೇಲೆ ಗಣಿ ಇಲಾಖೆ ಅಧಿಕಾರಿಗಳು ಅತೃಪ್ತರಾಗಿದ್ದಾರೆ.
ಗಣಿ ಅಧಿಕಾರಿಗಳನ್ನು ಪರಿಶೀಲಿಸದೆ ಟಿಪ್ಪರ್ ಗಳನ್ನು ಬಿಡುಗಡೆ ಮಾಡಿರುವುದು ಏಕೆ
ಪೊಲೀಸರಿಗೆ ಲೋಕಾಪುರ ಸುತ್ತಮುತ್ತಲಿನ ಅಕ್ರಮ ಮಣ್ಣು ಮಾಫಿಯಾದಿಂದ ಏನಾದರೂ ಸಹಾಯವಿದೆಯೇ?

ಗಣಿ ಇಲಾಖೆಯ ಅನುಮತಿ ಇಲ್ಲದೆ ಮಣ್ಣು ಗಣಿಗಾರಿಕೆಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆಯೇ 112 ಗೆ ಕರೆ ಮಾಡಿದ ನಂತರ ಅಕ್ರಮ ಮಣ್ಣು ಸಾಗಣೆ ಟಿಪ್ಪರ್‌ಗಳನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಗಣಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡದೆ ಪೊಲೀಸರು ಟಿಪ್ಪರ್ ಅನ್ನು ಬಿಡುಗಡೆ ಮಾಡಿದ್ದಾರೆ.

ಒಟ್ಟಾರೆ ಈ ಮಣ್ಣು ಮಾಫಿಯಾದ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿರುವುದಂತೂ ಸುಳ್ಳಲ್ಲ ಹೆಚ್ಚಿನ ತನಿಖೆಯಿಂದ ಮಣ್ಣು ಮಾಫಿಯಾ ಕೆ ಬ್ರೇಕ್ ಹಾಕಿ ರೈತರು ಭೂಮಿಯನ್ನು ರಕ್ಷಿಸಿಕೊಳ್ಳಬೇಕಾಗಿದೆ

Related Articles

Leave a Reply

Your email address will not be published. Required fields are marked *

Back to top button